Slide
Slide
Slide
previous arrow
next arrow

ಗುಡ್ಡಕುಸಿತ: ಮತ್ತೆರಡು ಮೃತದೇಹ ಪತ್ತೆ: ಸಾವಿನ ಸಂಖ್ಯೆ 6ಕ್ಕೆ ಏರಿಕೆ

300x250 AD

ಅಂಕೋಲಾ: ಹೆದ್ದಾರಿ ಬದಿಯಲ್ಲಿ ಟೀ ಸ್ವಾಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ ಶಿರೂರಿನ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ಕಟ್ಟಡ ಸಮೇತ ಕೊಚ್ಚಿ ಹೋಗಿತ್ತು. ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಮೃತದೇಹವಾಗಿ ಗೋಕರ್ಣ ವ್ಯಾಪ್ತಿಯ ಗಂಗೆಕೊಳ್ಳ-ದುಬ್ಬನಶಿಶಿ ಸಮುದ್ರ ಪ್ರದೇಶದಲ್ಲಿ ಪತ್ತೆಯಾಗಿದ್ದು, ಬುಧವಾರ ಲಕ್ಷ್ಮಣ ನಾಯ್ಕ ಹುಟ್ಟೂರು ಶಿರೂರು ಗ್ರಾಮದಲ್ಲಿ, ಪತಿ-ಪತ್ನಿ ಮತ್ತು ಮಗನ ಅಂತ್ಯ ಸಂಸ್ಕಾರ ನಡೆಸಲಾಗಿದೆ.ಹಾಗೂ ಓರ್ವ ಪುರುಷನ ಮೃತ ದೇಹವೂ ಪತ್ತೆಯಾಗಿದ್ದು, ಆತ ಟ್ಯಾಂಕರ್ ಗಾಡಿ ಚಾಲಕನಿರಬಹುದು ಎನ್ನಲಾಗಿತ್ತು

ಜು.18,ಗುರುವಾರ ಬಾಲಕಿ ಆವಂತಿಕಾ ಲಕ್ಷ್ಮಣ ನಾಯ್ಕ ಗೋಕರ್ಣ ಗಂಗೆಕೊಳ್ಳದ ಬಳಿ ಮೃತ ದೇಹವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಸಂಭವಿಸಿದ ದಿನ.

300x250 AD

ಗುರುವಾರ ಅಂಕೋಲಾ ಮಂಜಗುಣಿ ಬಳಿ ಮತ್ತೊಂದು ಪುರುಷನ ಮೃತದೇಹ ಪತ್ತೆಯಾಗಿದ್ದು, ಲಕ್ಷ್ಮಣ ನಾಯ್ಕ ಕುಟುಂಬದ 4 ಮತ್ತು ಇತರೆ 2 ಮೃತಹೇಹ ಸೇರಿ ಒಟ್ಟೂ ಮೃತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.

Share This
300x250 AD
300x250 AD
300x250 AD
Back to top